Dana Cyclone: ಪೂರ್ವ-ಮಧ್ಯ ಬಂಗಾಳಕೊಲ್ಲಿಯ ಮೇಲೆ ಹಾಗೂ ಅಂಡಮಾನ್ ಉತ್ತರ ಪ್ರದೇಶದಲ್ಲಿ ಕಡಿಮೆ ಒತ್ತಡ ಉಂಟಾಗಿರುವುದರಿಂದ ಅ. 22 ಮಂಗಳವಾರದ ಬೆಳಗಿನ ವೇಳೆಗೆ ಪಶ್ಚಿಮ ವಾಯುವ್ಯಕ್ಕೆ ಚಲಿಸುವುದರಿಂದ ಅ. 23 ಬುಧವಾರದ ಹೊತ್ತಿಗೆ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ತೀವ್ರ ಚಂಡಮಾರುತದಿಂದ ಭಾರಿ ಮಳೆಯಾಗಲಿರುವ ಕಾರಣ ಮುನ್ನೆಚರಿಕೆಯ ಕ್ರಮವಾಗಿ ಈ ಪ್ರದೇಶಗಳ ಮೇಲೆ ನಿಗಾ ಇರಿಸಲಾಗಿದೆ. ಅ. 24 ಮತ್ತು ಅ. 25 ರಂದು ಅತೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಸೂಚಿಸಲಾಗಿದೆ.
ಒಡಿಶಾದಲ್ಲಿ ಅ. 23 ರ ಸಂಜೆ ವೇಳೆ ಭಾರಿ ಮಳೆಯಾಗಲಿದೆ. ಅ. 24, 25 ರಂದು 7-20 ಸೆ.ಮೀ ಹಾಗೂ ಕೆಲವು ಪ್ರದೇಶಗಳಲ್ಲಿ 30 ಸೆ.ಮೀ ಗಿಂತ ಜಾಸ್ತಿ ಮಳೆಯಾಗುವ ಸಂಭವಿದೆ. ಅ. 24 ರಂದು ಚಂಡಮಾರುತದ ಗರಿಷ್ಠ ಗಾಳಿಯ ವೇಗ ಘಂಟೆಗೆ 100-120 ಕಿ.ಮೀ ವೇಗ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಮ್ ಮೋಹಪಾತ್ರ ತಿಳಿಸಿದ್ದಾರೆ.

ಚಂಡಮಾರುತದ ಪರಿಣಾಮ ಅ. 21 ರಿಂದ 23 ರ ವರೆಗೆ ಕೇರಳ ಮತ್ತು ಮಾಹೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ಅ.22 ಮತ್ತು ಅ. 23 ರಂದು ತಮಿಳುನಾಡು, ಪಾಂಡಿಚೆರಿ ಮತ್ತು ಕರೈಕಲ್ ಹಾಗೂ ಅ. 24, 25 ರಂದು ಆಂಧ್ರಪ್ರದೇಶದ ಕರಾವಳಿ ಭಾಗ ಮತ್ತು ಯಾನಂ ನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆಯೆಂದು ಹವಾಮಾನ ವರದಿ ಹೇಳಿದೆ.
ಕಳೆದ 24 ಘಂಟೆಗಳಲ್ಲಿ ಕರ್ನಾಟಕದ ಕರಾವಳಿ ಪ್ರದೇಶಗಳಾದ ಕದ್ರಾ (11), ಕುಂದಾಪುರ (9), ಮುಂಡಗೋಡು (8), ಕಾರವಾರ (7) ಸೆ.ಮೀ ಮಳೆಯಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಾದ ಹೊನ್ನಾಳಿ (8), ಶಿವಮೊಗ್ಗ (7), ಚಿತ್ರದುರ್ಗ (7), ಆನವಟ್ಟಿ (7) ಸೆ.ಮೀ ಮಳೆಯಾಗಿದೆ. ಮತ್ತು ಉತ್ತರ ಕರ್ನಾಟಕದ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ್ನಲ್ಲಿ 10 ಸೆ.ಮೀ ಮಳೆಯಾಗಿದೆ.
ಇನ್ನಷ್ಟು ಸುದ್ದಿಗಳು:
- ಬೆಟ್ಟದ ನೆಲ್ಲಿಕಾಯಿನ ಖಾಲಿ ಹೊಟ್ಟೇಲಿ ಸೇವಿಸೋದ್ರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.ನಾವೆಲ್ಲಾ ಯಾವಾಗ್ಲಾದ್ರೂ ಇದನ್ನ ಕೇಳೇ ಇರ್ತೀವಿ. ಬೆಟ್ಟದ ನೆಲ್ಲಿಕಾಯಿನ ದಿನಾ ತಿಂದ್ರೆ ಕೂದಲು… Read more: ಬೆಟ್ಟದ ನೆಲ್ಲಿಕಾಯಿನ ಖಾಲಿ ಹೊಟ್ಟೇಲಿ ಸೇವಿಸೋದ್ರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
- IPL Auction 2025: ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ! ನಾಯಕನ ಹುಡುಕಾಟದಲ್ಲಿ ಆರ್ಸಿಬಿ!IPL Auction 2025: ಐಪಿಎಲ್ 2025 ರ ಆವೃತ್ತಿಯ ಹರಾಜು ಪ್ರಕ್ರಿಯೆ ಇಂದು… Read more: IPL Auction 2025: ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ! ನಾಯಕನ ಹುಡುಕಾಟದಲ್ಲಿ ಆರ್ಸಿಬಿ!
- ನಾಳೆ ರಿಲೀಸ್ ಆಗಬೇಕಿದ್ದ ‘Nayanthara: Beyond the Fairy Tale’ ಡಾಕ್ಯುಮೆಂಟರಿಗೆ ನೈಟ್ಮೇರ್ ಆದ ನಟ ಧನುಷ್. ಧನುಷ್ಗೆ ಬಹಿರಂಗ ಪತ್ರ ಬರೆದ ನಟಿ ನಯನತಾರಾ. 10 ಕೋಟಿ ಬೇಡಿಕೆಯಿಟ್ಟ ನಟ ಧನುಷ್!Nayanthara: Beyond the Fairy Tale ನೆಟ್ಫ್ಲಿಕ್ಸ್ ನಲ್ಲಿ ನಾಳೆ ಬಿಡುಗಡೆಯಾಗುತ್ತಿರುವ ಲೇಡಿ… Read more: ನಾಳೆ ರಿಲೀಸ್ ಆಗಬೇಕಿದ್ದ ‘Nayanthara: Beyond the Fairy Tale’ ಡಾಕ್ಯುಮೆಂಟರಿಗೆ ನೈಟ್ಮೇರ್ ಆದ ನಟ ಧನುಷ್. ಧನುಷ್ಗೆ ಬಹಿರಂಗ ಪತ್ರ ಬರೆದ ನಟಿ ನಯನತಾರಾ. 10 ಕೋಟಿ ಬೇಡಿಕೆಯಿಟ್ಟ ನಟ ಧನುಷ್!
- ಭಾರತದ ISRO ಜೊತೆ ಕೈ ಜೋಡಿಸಿದ SpaceX. ಸ್ಪೇಸ್ ಎಕ್ಸ್ ನ Falcon 9 ರಾಕೆಟ್ನಲ್ಲಿ ಉಡಾವಣೆಯಾಗಲು ಸಜ್ಜಾಗಿದೆ ಭಾರತದ GSAT-20 ಉಪಗ್ರಹ!GSAT-20 Satellite Luanch: ಇದೇ ತಿಂಗಳ ನವೆಂಬರ್ 20 ರಂದು (ISRO –… Read more: ಭಾರತದ ISRO ಜೊತೆ ಕೈ ಜೋಡಿಸಿದ SpaceX. ಸ್ಪೇಸ್ ಎಕ್ಸ್ ನ Falcon 9 ರಾಕೆಟ್ನಲ್ಲಿ ಉಡಾವಣೆಯಾಗಲು ಸಜ್ಜಾಗಿದೆ ಭಾರತದ GSAT-20 ಉಪಗ್ರಹ!
- ಬೆಂಗಳೂರಿನಲ್ಲಿ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿ, ಒಂದನ್ನು ರದ್ದು ಮಾಡಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವತಿ!Bengaluru: ಬೆಂಗಳೂರಿನಲ್ಲಿ ಯುವತಿಯೊಬ್ಬರು ಒಂದೇ ಬಾರಿಗೆ ಎರಡೆರಡು ಆಟೋಗಳನ್ನು ಬುಕ್ ಮಾಡಿದ್ದಾರೆ. ಇಬ್ಬರು… Read more: ಬೆಂಗಳೂರಿನಲ್ಲಿ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿ, ಒಂದನ್ನು ರದ್ದು ಮಾಡಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವತಿ!